ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥಹ ಸಿಪ್ಪೆಯನ್ನು ಥಾಯ್ಲೆಂಡ್ ದೇಶದ ಜನ ಹಣ್ಣನ್ನು ತಿಂದು ಸಿಪ್ಪೆಯಿಂದಲೂ ಆಗಬಹುದಾದ ಉಪಯೋಗವನ್ನು ಕಂಡುಕೊಂಡಿದ್ದಾರೆ. ಏಕೆಂದರೆ ಇಲ್ಲಿ ಬಾಳೆ ಒಂದು ಪ್ರಮುಖವಾದ ಬೆಳೆ. ಇಲ್ಲಿ ಈ ಸಿಪ್ಪೆಯ ರಾಶಿ ರಾಶಿ ಬೀಳುತ್ತದೆ. ಇಂಥಹ ಸಿಪ್ಪೆಯನ್ನು ಬಳಸಿಕೊಂಡು ಜೈವಿಕ ಅನಿಲವನ್ನು ಉತ್ಪಾದಿಸುವ (Gas) ಸ್ಥಾವರವನ್ನು ಥಾಯ್ಲಾಂಡಿನ ನರಸುವಾನ್ ವಿಶ್ವವಿದ್ಯಾನಿಲಯದ ಸೌರಶಕ್ತಿತರಬೇತಿ ಕೇಂವ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಾಳೆಹಣ್ಣನ್ನು ಸಂಸ್ಕರಿಸುವ ಉದ್ಯಮಗಳು ಅಲ್ಲಿಯ ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿವೆ. ಉಳಿದ ಸಿಪ್ಪೆಯಿಂದ ಇಂಧನ ಅನಿಲವನ್ನು ಉತ್ಪಾದಿಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಜತೆಗೆ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ದನ ಕರಗಳ ಸಗಣಿಯನ್ನು ಮತ್ತು ಗಿಡಗಳನ್ನು ಕೊಳೆಯಿಸಿ ಮಿಥೇನ್ ಅನಿಲವನ್ನು ಉತ್ಪಾದಿಸುವಂತೆ, ದನಗಳ ಸಗಣಿಯಿಂದ ಗೋಬರ್ ಗ್ಯಾಸನ್ನು ಬಳೆಸುವಂತೆ ಥಾಯ್ಲಾಂಡಿನಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಇಂಧನ ಅನಿಲವನ್ನು ತಯಾರಿಸುವ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಥಾಯ್ಲಾಂಡಿನ ಬಂಗ್‌ಕ್ರಾತುಮ್ ಎಂಬ ಜಿಲ್ಲೆಯಲ್ಲಿ ನಡೆಯಿಸಿದ ಸಮೀಕ್ಷೆಯಿಂದ ಅಲ್ಲಿ ವರ್ಷಕ್ಕೆ 10 ಸಾವಿರ ಟನ್‌ಗಳಷ್ಟು ಬಾಳೆಹಣ್ಣುಗಳನ್ನು ಒಣಗಿಸಲಾಗುತ್ತದೆ. ಮತ್ತು ಇದರಿಂದ ಎರಡುವರೇ ಸಾವಿರ ಟನ್‌ಗಳಷ್ಟು ಸಿಪ್ಪೆ ಉಳಿಯುತ್ತದೆಂದು ತಿಳಿದು ಬಂದಿದೆ. ಇಂಥ ರಾಶಿ ರಾಶಿ ಬೀಳುವ ಸಿಪ್ಪೆಯಿಂದ  ಅನಾಯಾಸವಾಗಿ ಇಂಧನದ ಅನಿಲವನ್ನು ಉತ್ಪಾದಿಸುವ ಘಟಕಗಳು ನಡೆಯುತ್ತದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಜರ್ಮನಿಯ ತಾಂತ್ರಿಕ ಸಲಹಾ ಏಜೆನ್ಸಿಯು ಆರ್ಥಿಕ ಬೆಂಬಲ ನೀಡಿದೆ. 1995ರಲ್ಲಿ ಬಾಳೆಹಣ್ಣಿನ ಸಿಪ್ಪೆ ಆಧಾರಿತ ಇಂಧನ ಅನಿಲ ಸ್ಥಾವರ ಸ್ಥಾಪನೆಗೊಂಡಿದೆ. ಆರ್ಥಿಕವಾಗಿ ಬಾಳೆಹಣ್ಣು ಬೆಳೆಯುವ ಭಾರತದ ಪ್ರದೇಶಗಳಲಿ ನಿರುಪಯುಕ್ತವಾಗುವ ಬಾಳೆಹಣ್ಣಿನ ಸಿಪ್ಪೆಯಿಂದ ಇಂಥಹ ಅನಿಲವನ್ನು ಉತ್ಪಾದಿಸುವ
ಯೋಜನೆ ಬಂದರೆ ಇಂಧನದ ಸಮಸ್ಯೆ  ಒಂದಿಷ್ಟು ತೀರಿತು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷ್ಣ ಬಂದನೆ ಸಖೀ!
Next post ಮಂಡೆಕೋಲಿನ ಪಾತಾಳ ಬಾಂಜಾರ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys